|
ವರಾಹನಾಥಸ್ವಾಮಿ ದೇವಾಲಯ *ಟಿ.ಎಂ. ಸತೀಶ್
ಇದಕ್ಕೆ ಕಾರಣ ಈ ದೇವಾಲಯದಲ್ಲಿರುವ ಅಪರೂಪದ ಹಾಗೂ ಸುಂದರವಾದ ನುಣುಪಾದ ಕೃಷ್ಣಶಿಲೆಯ ಭೂವರಾಹನಾಥಸ್ವಾಮಿ. ಹೊಯ್ಸಳರ ಕಾಲದಲ್ಲಿ ಹೇಮಾವತಿ ದಂಡೆಯ ಮೇಲೆ ನಿರ್ಮಾಣವಾದ ಈ ದೇವಾಲಯ ಕ್ರಿ.ಶ. 1334ರಲ್ಲಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಡಲಾಗಿದೆ. ಹೊಯ್ಸಳರ ಮುಮ್ಮುಡಿ ಬಲ್ಲಾಳನ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುವ ಈ ದೇವಾಲಯ ಹೊಯ್ಸಳರ ಇತರ ದೇವಾಲಯಗಳಂತೆ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿಲ್ಲ. ಆದರೆ ಸಭಾಮಂಟಪದ ಎದುರು ಇರುವ ಗರ್ಭಗೃಹದಲ್ಲಿ ಪೀಠದ ಮೇಲೆ ಎಡ ತೊಡೆಯ ಮೇಲೆ ಭೂ ದೇವಿಯನ್ನು ಕೂರಿಸಿಕೊಂಡಿರುವ 15 ಅಡಿ ಎತ್ತರದ ಪೂರ್ವಾಭಿಮುಖ ವರಾಹಸ್ವಾಮಿ ವಿಗ್ರಹ ನಯನ ಮನೋಹರವಾಗಿದೆ. ಪೀಠದ ಎಡಭಾಗದಲ್ಲಿ ಆಂಜನೇಯಸ್ವಾಮಿಯ ಪುಟ್ಟ ವಿಗ್ರಹವೂ ಇದೆ.
ನೃಸಿಂಹ ಜಯಂತಿ, ವೈಕುಂಠ ಏಕಾದಶಿಯಂದು ಹಾಗೂ ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೃಹದಾಕಾರದ ಮೂರ್ತಿಗೆ ಮಾಡುವ ಅಭಿಷೇಕ ನೋಡಲು ಎರಡು ಕಣ್ಣು ಸಾಲದು.ಕಲ್ಲಹಳ್ಳಿಗೆ ಹೋಗಲು ಕೆ.ಆರ್.ಪೇಟೆ, ಮೇಲುಕೋಟೆ ಹಾಗೂ ಪಾಂಡವಪುರಗಳಿಂದ ನೇರ ಬಸ್ ಸೌಕರ್ಯವಿದೆ. ಸರ್ಕಾರ ಹಾಗೂ ಪ್ರವಾಸಿಗರ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಈ ಅಪರೂಪದ ದೇವಾಲಯವನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ. | |||