ಮುಖಪುಟ /ನಮ್ಮದೇವಾಲಯಗಳು

ವರಾಹನಾಥಸ್ವಾಮಿ ದೇವಾಲಯ

*ಟಿ.ಎಂ. ಸತೀಶ್

Bho varahanatha swamy, kannadaratna.com, our temples.in, karnataka temples, kallahalli, ಕನ್ನಡರತ್ನ.ಕಾಂ, ಭೂ ವರಹಸ್ವಾಮಿ ದೇವಾಲಯ, ಮಂಡ್ಯ, ಕಲ್ಲಹಳ್ಳಿ, ಪಾಂಡವಪುರ.ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆಯಿಂದ  18 ಕಿಲೋ ಮೀಟರ್ ದೂರದಲ್ಲಿರುವ ಊರು ಕಲ್ಲಹಳ್ಳಿ. ದೇವಲಾಪುರ ಎಂದೂ ಕರೆಸಿಕೊಂಡಿರುವ ಈ ಪುಟ್ಟ ಗ್ರಾಮದಲ್ಲೊಂದು ಪುಟ್ಟಗುಡಿಯಿದೆ. ಗುಡಿ ಪುಟ್ಟದಾದರೂ ಕೀರ್ತಿ ದೊಡ್ಡದು.

ಇದಕ್ಕೆ ಕಾರಣ ಈ ದೇವಾಲಯದಲ್ಲಿರುವ ಅಪರೂಪದ ಹಾಗೂ ಸುಂದರವಾದ ನುಣುಪಾದ ಕೃಷ್ಣಶಿಲೆಯ ಭೂವರಾಹನಾಥಸ್ವಾಮಿ. ಹೊಯ್ಸಳರ ಕಾಲದಲ್ಲಿ ಹೇಮಾವತಿ ದಂಡೆಯ ಮೇಲೆ ನಿರ್ಮಾಣವಾದ ಈ ದೇವಾಲಯ ಕ್ರಿ.ಶ. 1334ರಲ್ಲಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

ಹೊಯ್ಸಳರ ಮುಮ್ಮುಡಿ ಬಲ್ಲಾಳನ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುವ ಈ ದೇವಾಲಯ ಹೊಯ್ಸಳರ ಇತರ ದೇವಾಲಯಗಳಂತೆ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿಲ್ಲ. ಆದರೆ ಸಭಾಮಂಟಪದ ಎದುರು ಇರುವ ಗರ್ಭಗೃಹದಲ್ಲಿ ಪೀಠದ ಮೇಲೆ ಎಡ ತೊಡೆಯ ಮೇಲೆ ಭೂ ದೇವಿಯನ್ನು ಕೂರಿಸಿಕೊಂಡಿರುವ 15 ಅಡಿ ಎತ್ತರದ ಪೂರ್ವಾಭಿಮುಖ ವರಾಹಸ್ವಾಮಿ ವಿಗ್ರಹ ನಯನ ಮನೋಹರವಾಗಿದೆ. ಪೀಠದ ಎಡಭಾಗದಲ್ಲಿ ಆಂಜನೇಯಸ್ವಾಮಿಯ ಪುಟ್ಟ ವಿಗ್ರಹವೂ ಇದೆ.

Bho varahanatha swamy, kannadaratna.com, our temples.in, karnataka temples, kallahalli, ಕನ್ನಡರತ್ನ.ಕಾಂ, ಭೂ ವರಹಸ್ವಾಮಿ ದೇವಾಲಯ, ಮಂಡ್ಯ, ಕಲ್ಲಹಳ್ಳಿ, ಪಾಂಡವಪುರ.ಹಿರಣ್ಯಕಶಿಪುವಿನ ಸೋದರ ಹಿರಣ್ಯಾಕ್ಷ ಭೂದೇವಿಯನ್ನು ಹೊತ್ತೊಯ್ದು ಸಮುದ್ರದಲ್ಲಿ ಬಂಧಿಸಿಟ್ಟಾಗ, ವಿಷ್ಣು ವರಾಹಾವತಾರ ತಾಳಿ, ಹಿರಣ್ಯಾಕ್ಷನ ಕೊಂದು ಭೂದೇವಿಯನ್ನು ರಕ್ಷಿಸಿದ ಎಂದು ಪುರಾಣಗಳು ಸಾರುತ್ತವೆ. ವರಾಹಾವತಾರದ ವೈಶಿಷ್ಟ್ಯ ಸಾರುವ ಸುಂದರ ದೇವಾಲಯದ ಮುಂದಿನ ಬಯಲಿನಲ್ಲಿ ಶಾಸನವೂ ದೊರೆತಿದೆ. 

ನೃಸಿಂಹ ಜಯಂತಿ, ವೈಕುಂಠ ಏಕಾದಶಿಯಂದು ಹಾಗೂ ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೃಹದಾಕಾರದ ಮೂರ್ತಿಗೆ ಮಾಡುವ ಅಭಿಷೇಕ ನೋಡಲು ಎರಡು ಕಣ್ಣು ಸಾಲದು.ಕಲ್ಲಹಳ್ಳಿಗೆ ಹೋಗಲು ಕೆ.ಆರ್.ಪೇಟೆ, ಮೇಲುಕೋಟೆ ಹಾಗೂ ಪಾಂಡವಪುರಗಳಿಂದ ನೇರ ಬಸ್ ಸೌಕರ್ಯವಿದೆ. ಸರ್ಕಾರ ಹಾಗೂ ಪ್ರವಾಸಿಗರ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಈ ಅಪರೂಪದ ದೇವಾಲಯವನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ. 

ಮುಖಪುಟ /ನಮ್ಮದೇವಾಲಯಗಳು