|
ಗೊಮ್ಮಟೇಶನ ನೆಲೆಬೀಡು
ಶ್ರವಣಬೆಳಗೊಳ *ಟಿ.ಎಂ.ಸತೀಶ್
ಇತಿಹಾಸ: ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಶ್ರವಣಬೆಳಗೊಳ ಪ್ರಾಚೀನ ಇತಿಹಾಸವುಳ್ಳ ಒಂದು ಪುಟ್ಟ ಗ್ರಾಮ. ಹಿಂದೆ ಕಟವಪ್ರ, ಕಟಪ್ರ, ವೆಳ್ಗೊಳ, ಧವಳಸರ ತೀರ್ಥ ಎಂದು ಇದನ್ನು ಕರೆಯುತ್ತಿದ್ದರೆನ್ನುತ್ತವೆ ಶಾಸನಗಳು. ಊರಿನ ಮಧ್ಯೆ ಬಿಳಿ ಕೊಳವಿರುವುದರಿಂದ ಹಾಗೂ ಶ್ರವಣ ಎಂದರೆ ಜೈನ ಮುನಿ ಇಲ್ಲಿ ಹಲವಾರು ಜೈನಮುನಿಗಳು ನೆಲೆಸಿದ್ದರಿಂದ ಇದಕ್ಕೆ ಶ್ರವಣ ಬೆಳಗೊಳ ಎಂದು ಹೆಸರು ಬಂದಿದೆ ಎನ್ನುತ್ತಾರೆ ಪುರಜನ. ವಿಂದ್ಯಗಿರಿ, ಚಂದ್ರಗಿರಿ ಬೆಟ್ಟಗಳಿಂದ ಕಂಗೊಳಿಸುತ್ತಿರುವ ಈ ಪವಿತ್ರ ಪುಣ್ಯಸ್ಥಳದಲ್ಲಿ ಏಷ್ಯಾದ ಅತಿದೊಡ್ಡ ಶಾಂತಚಿತ್ತ, ಮದಸ್ಮಿತ ಬಾಹುಬಲಿಯ ೧೭ ಮೀಟರ್ (58 ಅಡಿ) ಗಳ ಎತ್ತರದ ಏಕಶಿಲೆಯ ಅಖಂಡ ಶಿಲಾ ಮೂರ್ತಿ ಇದೆ. ಬಾಹುಬಲಿಯ ಈ ಮೂರ್ತಿಯಿರುವ ಬೆಟ್ಟಕ್ಕೆ ವಿಂದ್ಯಗಿರಿ (ಇಂದ್ರಗಿರಿ) ಎನ್ನುತ್ತಾರೆ. ಇಲ್ಲಿ ಹಲವು ತೀರ್ಥಂಕರರ ಮೂರ್ತಿಗಳಿವೆ. ಜೈನ ಬಸದಿಗಳಿವೆ. ಶಿಲಾ ಶಾಸನಗಳಿವೆ.
ಚಂದ್ರಗಿರಿಯ ಪಾರ್ಶ್ವನಾಥ ಬಸದಿಯಲ್ಲಿ ಇರುವ ಮಾನಸ್ತಂಭ, ಇಂದ್ರಗಿರಿಯಲ್ಲಿರುವ ತ್ಯಾಗದ ಬ್ರಹ್ಮದೇವರ ಕಂಬ, ಅಕ್ಕನ ಬಸದಿಯ ಶಿಖರದ ಮುಂಭಾಗದಲ್ಲಿರುವ ಕೀರ್ತಿಮುಖ ಸೂಕ್ಷ್ಮ ಕೆತ್ತನೆಗಳಿಂದ ಗಮನಸೆಳೆಯುತ್ತವೆ. ದೊಡ್ಡಬೆಟ್ಟ ವಿಂದ್ಯಗಿರಿಯಲ್ಲಿರುವ ಭರತಮೂರ್ತಿಗಳು ಅತ್ಯಂತ ಮನೋಹರವಾಗಿವೆ. ಚಿಕ್ಕಬೆಟ್ಟದ ಚಂದ್ರಗುಪ್ತನ ಬಸದಿ ಅತ್ಯಂತ ಕಿರಿದಾದುದಾದರೆ, ಚಾವುಂಡರಾಯನ ಬಸದಿ ವಾಸ್ತುಶೈಲಿ ಹಾಗೂ ಕಲಾಕೌಶ್ಯಲ್ಯದ ದೃಷ್ಟಿಯಿಂದ ಮಹತ್ವ ಪಡೆಯುತ್ತದೆ.
ಚಾವುಂಡರಾಯ
ಶ್ರವಣಬೆಳಗೊಳದಲ್ಲಿ ವಿಶ್ವದ ಅತಿ ಎತ್ತರದ ಏಕಶಿಲೆಯ ಗೊಮ್ಮಟಮೂರ್ತಿಯನ್ನು
ಕೆತ್ತಿಸಿದ್ದಾನೆ. ಬಾಹುಬಲಿಗೆ ಗೊಮ್ಮಟೇಶ್ವರ ಎಂಬ ಹೆಸರುಕೊಟ್ಟ ಖ್ಯಾತಿ
ಕರುನಾಡಿಗೆ ಸಲ್ಲುತ್ತದೆ. ಬೆಳಗೊಳದ ಈ ಸುಂದರ ಮೂರ್ತಿ ೫೮ ಅಡಿ ಎತ್ತರವಿದ್ದು,
ಕಿವಿಯ ಕೆಳಭಾಗದವರೆಗಿನ ಎತ್ತರ ೫೧ ಅಡಿ,
ಕಿವಿಯ ಕೆಳಭಾಗದಿಂದ ನೆತ್ತಿಯವರೆಗಿನ ಎತ್ತರವೇ ಆರೂವರೆ
ಅಡಿಯಷ್ಟಿದೆ. ಪಾದದ ಉದ್ದ ೮ ಅಡಿ ೩ ಅಂಗುಲ ಇದ್ದು,
ಕಾಲ
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||