|
ಮುಖಪುಟ
/ನಮ್ಮ
ದೇವಾಲಯಗಳು ವನೌಷಧಗಳ ಧಾಮ ಸಿದ್ಧರಬೆಟ್ಟ *ಟಿ.ಎಂ.ಸತೀಶ್
ಬೆಟ್ಟದ ಮೇಲೆ ಗುಹಾಂತರ ದೇವಾಲಯವಿದ್ದು, ಹತ್ತಲು ಒಂದು ಹಂತದವರೆಗೆ ಮೆಟ್ಟಿಲುಗಳಿವೆ ನಂತರ ಬೆಟ್ಟವನ್ನೇ ಕಡೆದು ಚಿಕ್ಕ ಚಿಕ್ಕ ಮೆಟ್ಟಲು ಮಾಡಲಾಗಿದೆ. ಇದನ್ನು ಕಷ್ಟಪಟ್ಟು ಹತ್ತಿ ಮೇಲೆ ಹೋದರೆ, ಗುಹಾಂತರ ದೇವಾಲಯದಲ್ಲಿ ಶಿವ ಹಾಗೂ ಯತಿಯ ವರ್ಣಚಿತ್ರ ಮನಸೆಳೆಯುತ್ತದೆ. ಇಲ್ಲಿರುವ ಪುಟ್ಟ ಬಾವಿಯಂಥ ಕುಂಡಿಕೆಯಲ್ಲಿ ಸದಾ ಜಲಧಾರೆ. ಈ ನೀರು ರೆಫ್ರಿಜರೇಟರ್ನಲ್ಲಿ ಇಟ್ಟ ನೀರಿನಂತೆ ತಂಪಾಗಿರುವುದು ವಿಶೇಷ. ಬೆಟ್ಟಹತ್ತುವಾಗ ಆಗುವ ಆಯಾಸವನ್ನು ಸುತ್ತಲೂ ಇರುವ ರಮಣೀಯ ದೃಶ್ಯಗಳು ಮರೆಸುತ್ತವೆ. ಇಲ್ಲಿಂದ ಶಿವಗಂಗೆ ಬೆಟ್ಟ ಲಿಂಗಾಗೃತಿಯಲ್ಲಿ ಗೋಚರಿಸುತ್ತದೆ.
ಇಲ್ಲೊಂದು ಫಲಕವೂ ಇದೆ. ಅದರಲ್ಲಿ ಕೈ ಮುಗಿದು ಬಾ ಯಾತ್ರಿಕನೆ ಇದು ವನೌಷಧಗಳ ಬೀಡು. ನೀವು ಈ ಸಸ್ಯ ಸಂಕುಲ ಸಂರಕ್ಷಿಸಿದರೆ ಉಳಿವುದು ಮನುಜನ ಪ್ರಾಣ ಎಂಬ ಸಂದೇಶವಿದೆ. ಆರೋಗ್ಯಧಾಮವೂ, ಶಿವನನೆಲೆವೀಡೂ ಆದ ಇಲ್ಲಿಗೆ ಆಗಮಿಸಲು ತುಮಕೂರು, ಮಧುಗಿರಿಯಿಂದ ನೇರ ಬಸ್ ಸೌಕರ್ಯವಿದೆ. ಮಧುಗಿರಿಯಿಂದ ಇಲ್ಲಿಗೆ ೨೨ ಕಿಲೋ ಮೀಟರ್ ಮಾತ್ರ. | |||