|
ಮುಖಪುಟ
/ನಮ್ಮ
ದೇವಾಲಯಗಳು ಎಲ್ಲಮ್ಮನ ನೆಲೆವೀಡು ಸವದತ್ತಿ
ಚಾಲುಕ್ಯ ಹಾಗೂ ರಾಷ್ಟ್ರಕೂಟರ ವಾಸ್ತುಶೈಲಿಯಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಎಲ್ಲಮ್ಮನಿಗೆ ವೀರಶೈವ ಸಂಪ್ರದಾಯದ ರೀತ್ಯ ಪೂಜೆ ನಡೆಯುತ್ತದೆ. ಎಲ್ಲಮ್ಮ ದೇವಾಲಯಕ್ಕೆ ಎಲ್ಲ ಜಾತಿ, ಮತ, ಪಂಥಗಳ ಭಕ್ತರೂ ಆಗಮಿಸುತ್ತಾರೆ. ನಿತ್ಯವೂ ಇಲ್ಲಿಗೆ ಹೊಸ ಹೊಸ ಭಕ್ತರು ಬರುವುದು ವಿಶೇಷ. ಯಾವ ದಿನ ನನ್ನ ದೇವಾಲಯಕ್ಕೆ ಹೊಸ ಭಕ್ತರು ಬರುವುದಿಲ್ಲವೋ ಅಂದು ತಾನಲ್ಲಿ ಇರುವುದಿಲ್ಲ ಎಂದು ತಾಯಿ ಹೇಳಿದ್ದಾಳೆಂಬುದು ಜನರ ನಂಬಿಕೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರಗಳಂದು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಹುಣ್ಣಿಮೆಯ ದಿನವಂತೂ ಜನ ಜಾತ್ರೆಯೇ ನೆರೆದಿರುತ್ತದೆ. ಭಾರತ ಪೂರ್ಣಿಮೆಯ ದಿನ ಇಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರು ಸೇರಿ ದೊಡ್ಡ ಜಾತ್ರೆ ಆಚರಿಸುತ್ತಾರೆ.
ಹೀಗೆ ಎರಡು ಬಾರಿ ಹುಟ್ಟಿದ ತಾಯಿ ರೇಣುಕಾದೇವಿ, ತನ್ನ ಶಾಪವಿಮೋಚನೆಗೆ ಕಾರಣವಾದ ಬಾವಿಯ ಬಳಿ ಎಲ್ಲಮ್ಮನಾಗಿ ನೆಲೆಸಿ ಭಕ್ತರನ್ನು ಹರಸುತ್ತಿದ್ದಾಳಂತೆ.ಈ ಪವಿತ್ರ ತಾಣದಲ್ಲಿ ಜಮದಗ್ನಿ ಹಾಗೂ ಪರಶುರಾಮರ ದೇವಾಲಯಗಳೂ ಇವೆ. ಮತ್ತೊಂದು ಕಥೆಯ ಪ್ರಕಾರ, ಶ್ರೀಮಂತ ವೀರಶೈವ ಕುಟುಂಬದಲ್ಲಿ ಜನಿಸಿದ ಎಲ್ಲಮ್ಮ. ತೊನ್ನು ರೋಗಕ್ಕೆ ತುತ್ತಾಗುತ್ತಾಳೆ. ಯಾರೂ ಆಕೆಯನ್ನು ಮದುವೆಯಾಗುವುದಿಲ್ಲ. ಸವದತ್ತಿಗೆ ಬಂದು ಗುಡ್ಡದಲ್ಲಿ ಎಕ್ಕಯ್ಯ ಜೋಗಯ್ಯರ ಪಾದುಕೆಯ ಮೇಲಿನ ಮಳೆನೀರು ಬಿದ್ದಕ್ಷಣವೇ ತೊನ್ನು ಮಾಯವಾಯಿತು. ಆಗ ಆಕೆ ಸಿದ್ದರ ಧ್ಯಾನದಲ್ಲಿ ಅಲ್ಲೇ ಕುಳಿತಳು. ಕೊನೆಗೆ ಪ್ರತ್ಯಕ್ಷರಾದ ಅವರು ಎಲ್ಲ ರೀತಿಯ ಯಂತ್ರ ಮಂತ್ರ ರಸವಿದ್ಯೆಗಳನ್ನು ಹೇಳಿಕೊಟ್ಟರಂತೆ. ಎಲ್ಲಮ್ಮನಿಗೆ ಪರಮಪವಿತ್ರವಾದ ಶಿವಪಂಚಾಕ್ಷರಿ ಮಂತ್ರವನ್ನೂ ಉಪದೇಶಿಸಿದರಂತೆ. ಗುರುವಾಜ್ಞೆಯಂತೆ ಎಲ್ಲಮ್ಮ ಅಲ್ಲಿಯೇ ನೆಲೆಸಿ ತಪವನ್ನಾಚರಿಸಿ, ಭಕ್ತರ ಅಭಿಷ್ಠ ಪೂರೈಸಲು ದೇವತೆಯಾಗಿ ಅಲ್ಲಿಯೇ ಪ್ರತಿಷ್ಠಾಪಿತಳಾದಳಂತೆ. ಹಿಂದೆ ಸುಗಂಧವರ್ತಿ, ಸಂವಧವರ್ತಿ, ಸವಧವರ್ತಿ ಎಂದು ಖ್ಯಾತವಾಗಿದ್ದ ಪಟ್ಟಣ 10ರಿಂದ 13ನೇ ಶತಮಾನದಲ್ಲಿ ರಟ್ಟರ ರಾಜಧಾನಿಯಾಗಿತ್ತು. ಇಲ್ಲಿ ಅಂಕುರೇಶ್ವರ, ಪುರಂದರೇಶ್ವರ, ಶಂಕರಲಿಂಗ ದೇವ ಮುಂತಾದ ಹಳೆಯ ದೇವಾಲಯಗಳಿವೆ. ಒಂದು ಜೈನ ಬಸದಿಯೂ ಇದೆ. ಸವದತ್ತಿಯ ಉತ್ತರಕ್ಕೆ 11 ಕಿಮೀ ದೂರದಲ್ಲಿರುವ ಮನೋಳಿಯ ಮಲಪ್ರಭಾ ದಂಡೆಯ ಮೇಲೆ ಸುಂದರವಾದ ಪಂಚಲಿಂಗದೇವರ ಮಂದಿರಗಳಿವೆ. ಹತ್ತಿರದ ಮುರಗೋಡಿನಲ್ಲಿ ಮಲ್ಲಿಕಾರ್ಜುನ ದೇವಾಲಯವಿದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||