ಮುಖಪುಟ /ನಮ್ಮದೇವಾಲಯಗಳು   

ಮುಳಬಾಗಲು ಆಂಜನೇಯಸ್ವಾಮಿ ದೇವಾಲಯ

*ಟಿ.ಎಂ.ಸತೀಶ್

Mulabagalu anjaneya temple, ಆಂಜನೇಯ ದೇವಾಲಯ ಮುಳಬಾಗಲು,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಆಂಧ್ರದ ಕಡೆಯಿಂದ ಕರ್ನಾಟಕಕ್ಕೆ ಮೂಡಣ (ಪೂರ್ವ)ದ ಪ್ರವೇಶದ್ವಾರವಾದ ಮುಳಬಾಗಲು, ಸಾಹಿತ್ಯ, ಕಲೆ, ಸಂಸ್ಕೃತಿಯ ಬೀಡು. ಕನ್ನಡದ ಹೆಸರಾಂತ ಚಿಂತಕ, ಕವಿ, ಸಾಹಿತಿ ವಿರಕ್ತ ರಾಷ್ಟ್ರಕ ಡಿ.ವಿ. ಗುಂಡಪ್ಪನವರ ಸ್ಪೂರ್ತಿಯ ಸೆಲೆಯೂ ಹೌದು.

ಮುಳಬಾಗಿನಲ್ಲಿನ ಪ್ರಾಚೀನವಾದ ಆಂಜನೆಯನ ದೇವಾಲಯವಿದೆ. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಆಂಜನೇಯನ ದೇವಾಲಯ ಸುಮಾರು 5 ಸಾವಿರ ವರ್ಷಗಳಷ್ಟು ಪುರಾತನವಾದುದೆಂದು ಹೇಳುತ್ತಾರೆ.

ದೇವಾಲಯ ವಿಶಾಲವಾಗಿದ್ದು, ವಿಜಯನಗರ ಶೈಲಿಯ ಪ್ರವೇಶದ್ವಾರವಿದೆ. ದ್ವಾರ ಪ್ರವೇಶಿಸಿ ಒಳ ಹೋದರೆ, ಪುರಾತನವಾದ ಆಂಜನೇಯಸ್ವಾಮಿಯ ದೇವಾಲಯ ಕಾಣುತ್ತದೆ.

ಸುಮಾರು 10 ಅಡಿ ಎತ್ತರವಿರುವ ಆಂಜನೇಯನನ್ನು ದ್ವಾಪರಯುಗದಲ್ಲಿ ಅರ್ಜುನ ಪ್ರತಿಷ್ಠಾಪಿಸಿದ ಎಂದು ಸ್ಥಳ ಪುರಾಣ ಹೇಳುತ್ತದೆ. ನಿತ್ಯವೂ ಆಂಜನೇಯನಿಗೆ ತಾಳೆ ಹೂವಿನ ಪೂಜೆ ನಡೆಯುವುದು ಇಲ್ಲಿನ ವಿಶೇಷ.

ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿರುವ ಭಿತ್ತಿಯಲ್ಲಿ ಹಲ್ಲಿಯ ಉಬ್ಬುಶಿಲ್ಪವನ್ನು ಕೆತ್ತಲಾಗಿದೆ. ಅದಕ್ಕೆ ಈ ಹಲ್ಲಿಯನ್ನು ಮುಟ್ಟಿ ನಮಸ್ಕರಿಸಿದರೆ ಹಲ್ಲಿ ಬಿದ್ದ ಶಕುನ ದೋಷ ನಾಷವಾಗುತ್ತದೆ ಎಂಬುದು ನಂಬಿಕೆ. ಅಷ್ಟೇಕೆ ಹಲ್ಲಿ ಬಿದ್ದವರು ಈ ಹಲ್ಲಿ ಮುಟ್ಟಿ ಬಂದವರ ಕಾಲಿಗೆ ಬಿದ್ದು ನಮಸ್ಕರಿಸಿದರೂ ಸಾಕು ದೋಷ ಪರಿಹಾರವಾಗುತ್ತದೆ ಎನ್ನುತ್ತಾರೆ ಹಿರಿಯರು.

ದೇವಾಲಯದ ಗರ್ಭಗೃಹದಲ್ಲಿ ಪ್ರಾಣದೇವರ ಸುಂದರವಾದ ಮೂರ್ತಿಯಿದೆ. ವೀಳೆದೆಲೆಯ ಅಲಂಕಾರದಲ್ಲಿ ದೇವರ ಮೂರ್ತಿಯ ಸೌಂದರ್ಯ ನೂರ್ಮಡಿಗೊಳ್ಳುತ್ತದೆ. ಪಕ್ಕದಲ್ಲಿಯೇ ಸೀತಾರಾಮರ ದೇವಾಲಯವೂ ಇದೆ.

Mulabagalu anjaneya temple, ಆಂಜನೇಯ ದೇವಾಲಯ ಮುಳಬಾಗಲುಮುಳಬಾಗಲಿಗೆ ಕೆಲವೇ ಕಿಲೋ ಮೀಟರ್ ದೂರದಲ್ಲಿ ಚೋಳರ ಕಾಲದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯವಿದೆ. ಬೆಟ್ಟಗುಡ್ಡಗಳಿಂದ ಕೂಡಿದ  ಮುಳಬಾಗಲಿನಲ್ಲಿ  ಅವನಿ ಬಳಿಯಿರುವ ಬೆಟ್ಟಗಳ ಸಾಲು ಅತಿ ದೊಡ್ಡದು. ಮುಳಬಾಗಲು ಮೊದಲಿಗೆ ಬಾಣರ ಆಡಳಿಕ್ಕೆ ಸೇರಿತ್ತು, 10ನೆ ಶತಮಾನದ ಕೊನೆಯಲ್ಲಿ ಪಲ್ಲವರ, ನಂತರ ವಿಜಯನಗರದ ಅರಸರ ಕೈವಶವಾಯ್ತು. 1768ರಿಂದ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು ಎನ್ನುತ್ತದೆ ಇತಿಹಾಸ. ಬೆಂಗಳೂರು-ಹಳೆ ಮದರಾಸು ರಸ್ತೆಯಲ್ಲಿ ಇರುವ ಮುಳಬಾಗಿಲು, ಕೋಲಾರದಿಂದ 30 ಕಿಲೋ ಮೀಟರ್ ದೂರದಲ್ಲಿದೆ.

 

 ಮುಖಪುಟ /ನಮ್ಮದೇವಾಲಯಗಳು