|
ಮುಖಪುಟ
/ನಮ್ಮದೇವಾಲಯಗಳು
ಪ್ರಕೃತಿಯ ಮಡಿಲ ಸೌಂದರ್ಯ ಲಹರಿ ಅನ್ನಪೂರ್ಣೆಯ ಹೊರನಾಡು
*ಎನ್.
ಶೋಭಾ
‘ಭವತಿ
ಭಿಕ್ಷಾಂ ದೇಹಿ’
ಎಂದು ಕೈನೀಡಿ ಬೇಡಿದ ಕೈಲಾಸನಾಥನಾದ ಶಂಕರನಿಗೇ ಭಿಕ್ಷೆ ನೀಡಿದ
ತಾಯಿ ಅನ್ನಪೂರ್ಣೇಶ್ವರಿಯನ್ನು ಸ್ತುತಿಸುವುದೇ ಹೀಗೆ. ಇಂತಹ ಮಂಗಳಮಯಳಾದ ತಾಯಿಯು
ಕರ್ನಾಟಕದ ನಿತ್ಯಹರಿದ್ವರ್ಣದ ಕಾನನದ ಗಿರಿ ಪ್ರದೇಶವಾದ ಮಲೆನಾಡ ಮಡಿಲ ಸೌಂದರ್ಯ
ಲಹರಿ ಹೊರನಾಡಿನಲ್ಲಿ ನೆಲೆಸಿದ್ದಾಳೆ.
ಭಕ್ತಿಭಾವ
ಉಕ್ಕಿಸುವ ಆರು ಅಡಿ ಎತ್ತರದ ಸುಂದರವಾದ ವಿಗ್ರಹ ರೂಪದಲ್ಲಿ ಹೊರನಾಡಿನಲ್ಲಿ ನೆಲೆ
ನಿಂತಿರುವ ಆದಿಶಕ್ತ್ಯಾತ್ಮಿಕೆಯಾದ ತಾಯಿ ಅನ್ನಪೂರ್ಣೆಶ್ವರಿಯನ್ನು ನೋಡುವುದೇ ಒಂದು
ಸೌಭಾಗ್ಯ. ಹೀಗಾಗೆ ಕವಿ.. ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು,
ನಾಲಿಗೆ ಸಾವಿರ ಸಾಲದು.. ಈಶ್ವರಿ ನಿನ್ನನು ಹೊಗಳು... ಎಂದು
ಹಾಡಿರುವುದು.
ದೇವಿಯ ಪಾದದ
ಬಳಿಯೇ ನಿಂತು ಅತಿ ಹತ್ತಿರದಿಂದ ತಾಯಿ ಅನ್ನಪೂರ್ಣೆಯ ದರ್ಶನ ಪಡೆವ ಅವಕಾಶವೂ
ಇಲ್ಲುಂಟು. ಹೊರನಾಡಿನ ದೊಡ್ಡಮನೆ ಪಾಳೆಗಾರ ಮನೆತನದ ಕುಲದೇವತೆ ಎಂದೂ ಹೇಳಲಾಗುವ ಈ
ತಾಯಿ ಹೊರನಾಡಿನ ಸುತ್ತಮುತ್ತಲ ಪ್ರದೇಶದ ಜನರ ಅದೇವತೆ. ಆರಾಧ್ಯ ದೇವತೆ. ಹೀಗಾಗೇ
ಇಲ್ಲಿನ ರೈತರು ತಾವು ಬೆಳೆದ ಮೊದಲ ಫಸಲನ್ನು ತಾಯಿಯ ಸನ್ನಿಗೆ ಒಪ್ಪಿಸಿ ತಮ್ಮನ್ನು
ರಕ್ಷಿಸೆಂದು ಕೋರುತ್ತಾರೆ.
ಉಚಿತ ಊಟ- ವಸತಿ :
ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೩೩೦ ಕಿಮೀ ದೂರದಲ್ಲಿರುವ ಹೊರನಾಡಿಗೆ ಹೋಗಲು ನೇರ
ಬಸ್ ಸೌಕರ್ಯವಿದೆ. ಹೊರನಾಡಿನಿಂದ ಶಾರದಾಪೀಠ- ವಿದ್ಯಾಶಂಕರ ದೇವಾಲಯಗಳಿರುವ
ಶೃಂಗೇರಿಗೆ ಕೇವಲ ೭೫ ಕಿಮೀ. ಕರ್ನಾಟಕದ ಕಾಫಿಯ ಕಣಜ ಚಿಕ್ಕಮಗಳೂರಿನಿಂದ ೧೦೦ ಕಿಮೀ.
ತಾಯಿ ಆದಿ
ಶಕ್ತ್ಯಾ ತ್ಮಕೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯದ ಧರ್ಮಕರ್ತರಾದ
ಜಿ.ಭೀಮೇಶ್ವರ ಜೋಶಿ,
ಅವರು ದೇವಾಲಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಡ
ವಿದ್ಯಾರ್ಥಿಗಳಿಗೆ ದೇವಾಲಯದ ವತಿಯಿಂದ ಉಚಿತ ಶಿಕ್ಷಣವನ್ನೂ ನೀಡುತ್ತಿದ್ದಾರೆ.
ಮೂತ್ರಕೋಶ ತೊಂದರೆ, ಹೃದ್ರೋಗ ಮೊದಲಾದ ಕಾಯಿಲೆಯಿಂದ
ಬಳಲುತ್ತಿರುವ ಬಡ ರೋಗಿಗಳಿಗೆ ಧನ್ವಂತರಿ ಯೋಜನೆಯಡಿ ಆರ್ಥಿಕ ನೆರವನ್ನೂ
ದೇವಾಲಯದಿಂದ ನೀಡಲಾಗುತ್ತದೆ. ಸಪ್ತಪದಿ ಯೋಜನೆಯಡಿ ಪ್ರತಿವರ್ಷ ದೇವಿಯ ಸನ್ನಿಯಲ್ಲಿ
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವೂ ಜರುಗುತ್ತದೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903 | |||