ಮುಖಪುಟ /ನಮ್ಮದೇವಾಲಯಗಳು  

ಭೂಕೈಲಾಸವೀ ಗೋಕರ್ಣ ಮಹಾಕ್ಷೇತ್ರ

*ಟಿ.ಎಂ.ಸತೀಶ್

Gokarna temple, kannadaratna.comಕಾಶಿ, ರಾಮೇಶ್ವರ ಹಾಗೂ ಗೋಕರ್ಣ ತ್ರಿಸ್ಥಲಿ ಶೈವಕ್ಷೇತ್ರಗಳೆಂದೇ ಖ್ಯಾತವಾಗಿವೆ. ತ್ರಿಸ್ಥಳಗಳಲ್ಲಿ ಒಂದು ಕರ್ನಾಟಕದಲ್ಲಿರುವ ನಿಜಕ್ಕೂ ಹೆಮ್ಮೆಯ ಸಂಗತಿ.  ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನಲ್ಲಿರುವ ಗೋಕರ್ಣದಲ್ಲಿ ಸಾಕ್ಷಾತ್ ಪರಶಿವನ ಆತ್ಮಲಿಂಗವನ್ನೇ ಹೊಂದಿದೆ ಎನ್ನುತ್ತದೆ ಪುರಾಣ.

ತ್ರೇತಾಯುಗದಲ್ಲಿ ರಾವಣ, ಈಶ್ವರನನ್ನು ಕುರಿತು ತಪಸ್ಸುಮಾಡಿ ಆತ್ಮಲಿಂಗವನ್ನೇ ವರವಾಗಿ ಪಡೆದು  ಲಂಕೆಗೆ ಒಯ್ಯುತ್ತಿದ್ದಾಗ, ಗೋಕರ್ಣದ ಬಳಿ ಬಂದಾಗ ಸಂಧ್ಯಾಕಾಲವಾಗುತ್ತದೆ. ಬ್ರಾಹ್ಮಣನಾದ ರಾವಣ ಅರ್ಘ್ಯಪ್ರದಾನಕ್ಕಾಗಿ ಹೋಗುವಾಗ ಅಲ್ಲಿ ಪ್ರತ್ಯಕ್ಷನಾದ ಬ್ರಹ್ಮಚಾರಿ ರೂಪದ ಗಣಪತಿಯ ಕೈಯಲ್ಲಿ ಆತ್ಮಲಿಂಗ ಕೊಟ್ಟು ಸಂಧ್ಯಾಂದನೆಗೆ ಸಮುದ್ರಕ್ಕೆ ಇಳಿಯುತ್ತಾನೆ.

Shivana Atmalinga, ಶಿವನ ಆತ್ಮಲಿಂಗವಿರುವ ಕ್ಷೇತ್ರ ಗೋಕರ್ಣ, gokarna, Om beachಸಮಯ ನೋಡಿ ಗಣಪತಿ ಲಿಂಗವನ್ನು ಭೂಸ್ಪರ್ಶ ಮಾಡಿಸುತ್ತಾನೆ.  ಕೋಪದಿಂದ ಗಣಪನ ತಲೆಗೆ ಕುಟ್ಟಿದ ರಾವಣ, ಲಿಂಗವನ್ನು ಕೀಳಲು ಶತಪ್ರಯತ್ನ ಮಾಡಿ ಸೋಲುತ್ತಾನೆ. ಲಿಂಗವನ್ನು ಕೀಳುವ ಸಮಯದಲ್ಲಿ ಲಿಂಗವನ್ನು ತಿರುಗಿಸಿ ಎಳೆದ ಕಾರಣ ಅದು ಗೋವಿನ ಕಿವಿಯ ಆಕಾರಕ್ಕೆ ತಿರುಗಿತು ಹೀಗಾಗೇ ಈ ಕ್ಷೇತ್ರಕ್ಕೆ ಗೋಕರ್ಣ ಎಂದು ಹೆಸರಾಯಿತು ಎನ್ನುತ್ತದೆ ಪುರಾಣ.

 ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ ಈಶ್ವರ ಮಹಾಬಲೇಶ್ವರ ಲಿಂಗವಾಗಿ ನೆಲೆಸಿದ್ದಾರೆ. ಇದಲ್ಲದೆ ಇಲ್ಲಿ ಇತರ ೩೦ ಲಿಂಗಗಳೂ ೩೦ ತೀರ್ಥಗಳೂ ಇವೆ. ಮಹಾಬಲೇಶ್ವರ ದೇವರ ಗರ್ಭಗುಡಿಯ ವಿಶಾಲವಾಗಿದ್ದು,  ಸಭಾಮಂಟಪ, ಚಂದ್ರಶಾಲೆ, ಗರ್ಭಗುಡಿಯನ್ನು ಒಳಗೊಂಡಿದೆ.  ಸಭಾಮಂಟಪದಲ್ಲಿ ಪಾರ್ವತಿ, ಗಣಪತಿ  ಮಧ್ಯದಲ್ಲಿ ನಂದಿ ವಿಗ್ರಹವೂ ಇದೆ.

Shivana Atmalinga, ಶಿವನ ಆತ್ಮಲಿಂಗವಿರುವ ಕ್ಷೇತ್ರ ಗೋಕರ್ಣ, gokarna, Om beachಪ್ರತಿವರ್ಷ ಫಾಲ್ಗುಣ ಶುದ್ಧ ಪಾಡ್ಯದಂದು ಇಲ್ಲಿ ರಥೋತ್ಸವ ಜರುಗುತ್ತದೆ.  ಶಿವರಾತ್ರಿ ಕಾಲದಲ್ಲಿ ನಡೆಯುವ ಜಾತ್ರೆ ಜಗತ್ಪ್ರಸಿದ್ಧ

ಕೋಟಿತೀರ್ಥ : ಗೋಕರ್ಣದಲ್ಲಿ 30 ತೀರ್ಥಗಳಿದ್ದು, ಕೋಟಿ ತೀರ್ಥ ಪ್ರಧಾನವಾದ್ದು. ಶಿವರಾತ್ರಿಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ಕೋಟಿತೀರ್ಥ ಸ್ನಾನ ಮಾಡಿ ಪುನೀತರಾಗುತ್ತದೆ. ಇದರ ಪಶ್ಚಿಮಕ್ಕೆ ನರಸಿಂಹ ದೇವಾಲಯವಿದೆದಕ್ಷಿಣಕ್ಕೆ ಅಗಸ್ತ್ಯ, ಸುಮಿತ್ರಾ, ಗಂಗಾತೀರ್ಥಗಳೆಂಬ  ಗುಹೆಗಳಿವೆ.  ಶತಶೃಂಗದ ಮೇಲೆ ಗೋಗರ್ಭ ತೀರ್ಥ, ಬ್ರಹ್ಮಕಮಂಡಲ ತೀರ್ಥ ಮತ್ತು ಮಹೇಶ್ವರರಾರಣ್ಯಗಳಿವೆ. ಆ ಗುಡ್ಡದ ಕೆಳಗೆ ಮಾಲಿನಿ, ಸುಮಾಲಿನಿ, ಸೂರ್ಯ, ಚಂದ್ರ ಮತ್ತು ಅನಂತ ಎಂಬ ತೀರ್ಥಗಳಿವೆ.

ಗಣಪತಿ : ಗೋಕರ್ಣದಲ್ಲಿ ಮಹಾಬಲೇಶ್ವರನ ಸ್ಥಾಪನೆಗೆ ಕಾರಣನಾದ ಗಣಪತಿಯ ದೇವಾಲಯವಿದೆ. ಇಲ್ಲಿರುವ ನಿಂತಿರುವ ಗಣಪನ ವಿಗ್ರಹ ಕರ್ನಾಟಕದ ಅತಿ ಪ್ರಾಚೀನ ಗಣೇಶ ವಿಗ್ರಹಗಳಲ್ಲಿ ಒಂದಾಗಿದೆ. Shivana Atmalinga, ಶಿವನ ಆತ್ಮಲಿಂಗವಿರುವ ಕ್ಷೇತ್ರ ಗೋಕರ್ಣ, gokarna, Om beachಇದು ಸುಮಾರು 6 ಅಥವಾ 7ನೇ ಶತಮಾನದ್ದೆನ್ನುತ್ತಾರೆ ಇತಿಹಾಸತಜ್ಞರು.

ಸಮುದ್ರ ತಡಿಯಲ್ಲೇ ಈ ಪವಿತ್ರ ಪುಣ್ಯಕ್ಷೇತ್ರವಿದ್ದು, ಭೂಮಾರ್ಗ, ಜಲಮಾರ್ಗಗಳೆರಡರಿಂದಲೂ ಗೋಕರ್ಣಕ್ಕೆ ಬರಲು ಅವಕಾಶವಿದೆ. ಇಲ್ಲಿಗೆ 3 ಕಿಲೋ ಮೀಟರ್ ದೂರದಲ್ಲಿರುವ  ತದಡಿ ಬಂದರಕ್ಕೆ ಉಗಿ ಹಡಗಿನಲ್ಲಿ ಪ್ರಯಾಣ ಮಾಡಲೂ ಅವಕಾಶವಿದೆ. ಗೋಕರ್ಣದ ಓಂ ಬೀಚ್ ಪ್ರಸಿದ್ಧವಾಗಿದ್ದು, ವಿದೇಶೀ ಯಾತ್ರಿಕರನ್ನೂ ತನ್ನತ್ತ ಸೆಳೆಯುತ್ತಿದೆ.  

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು

M.V.Shankaranarayan

Our ministers.com