|
ಮುಖಪುಟ
/ನಮ್ಮ
ದೇವಾಲಯಗಳು
ಮಹಿಷಾಸುರಮರ್ದಿನಿ ನೆಲೆಸಿಹ ಚಾಮುಂಡಿಬೆಟ್ಟ * ಟಿ.ಎಂ.ಸತೀಶ್
ಮೈಸೂರಿನ ಚಾಮುಂಡಿ ಬೆಟ್ಟ 10ನೇ ಶತಮಾನದಲ್ಲೇ ಪುಣ್ಯಕ್ಷೇತ್ರವಾಗಿತ್ತೆಂದು ಹೇಳುತ್ತದೆ ಇತಿಹಾಸ. ಶಾಸನಗಳ ರೀತ್ಯ ಹಿಂದೆ ಈ ಕ್ಷೇತ್ರವನ್ನು ಮಬ್ಬೆಲದ ತೀರ್ಥ ಅಥವಾ ಮರ್ಬಳದ ತೀರ್ಥ ಎಂದು ಕರೆಯುತ್ತಿದ್ದರೆಂದು ತಿಳಿಯುತ್ತದೆ. ಪ್ರಸ್ತುತ ಬೆಟ್ಟದಲ್ಲಿರುವ ಮಹಬಲೇಶ್ವರ ದೇವಸ್ಥಾನ ಹೊಯ್ಸಳರ ವಿಷ್ಣುವರ್ಧನನ ಕಾಲಕ್ಕಿಂತ ಮೊದಲೇ ನಿರ್ಣಾಣವಾಗಿತ್ತು ಎಂಬುದನ್ನು ಶಾಸನಗಳು ಪುಷ್ಟೀಕರಿಸುತ್ತವೆ. ವಿಷ್ಣುವರ್ಧನ 1,128ರಲ್ಲಿ ಮರ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದನೆಂಬುದೂ ತಿಳಿದುಬರುತ್ತದೆ.
ಮೈಸೂರು ಅರಸರಲ್ಲಿ ಒಬ್ಬರಾದ ದೊಡ್ಡ ದೇವರಾಜ ಒಡೆಯರು ಸಾರ್ವಜನಿಕರು ಬೆಟ್ಟದ ತಾಯಿಯ ದರ್ಶನ ಪಡೆಯಲು ಅನುಕೂಲವಾಗಲೆಂದು ಚಾಮುಂಡಿ ಬೆಟ್ಟಕ್ಕೆ ಸಾವಿರ ಮೆಟ್ಟಲುಗಳನ್ನು ಕಟ್ಟಿಸಿದರು. ಈ ಸಾವಿರ ಮೆಟ್ಟಿಲುಗಳನ್ನು ಏರುವ ಭಕ್ತರು ದಣಿವಾರಿಸಿಕೊಲ್ಳಲೆಂದು ಮಾರ್ಗಮಧ್ಯದಲ್ಲಿ ಅಂದರೆ 700ನೇ ಮೆಟ್ಟಿಲಿನ ಬಳಿ ಬೃಹದಾಕಾರದ ನಂದಿಯನ್ನೂ ಪ್ರತಿಷ್ಠೆ ಮಾಡಿದರು.
16
ಅಡಿ ಎತ್ತರದ ಹೆಬ್ಬಂಡೆಯಲ್ಲಿ ಕಡೆಯಲಾಗಿರುವ ನಂದಿಯ ಸುಂದರ ಮುರ್ತಿ ಬೆಟ್ಟದ ಪ್ರಮುಖ
ತಾಣಗಳಲ್ಲಿ ಒಂದಾಗಿದೆ. ನಂದಿಯ ಮೂರ್ತಿಯಲ್ಲಿ ಗಂಟೆಸರ,
ಗೆಜ್ಜೆಸರಗಳನ್ನು ಶಿಲ್ಪಿ ಸುಂದರವಾಗಿ ಕಡೆದಿದ್ದಾನೆ. ಬೆಟ್ಟದ
ಮೇಲಿರುವ ಚಾಮುಂಡೇಶ್ವರಿಯ ಪುರಾತನ ದೇವಾಲಯ
ದ್ರಾವಿಡ ಶೈಲಿಯ ದೇವಾಲಯಗಳಂತೆ ಈ ದೇವಾಲಯದಲ್ಲೂ ಸುಕನಾಸಿ ಮತ್ತು ನವರಂಗಗಳಿವೆ. ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಸನವೇ ಮೊದಲಾದ ಹಲವು ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಆಭರಣಗಳನ್ನು ರಾಜಮನೆತವರು ದೇವಿಗೆ ಸಮರ್ಪಿಸಿದ್ದಾರೆ.
ಬೆಟ್ಟ ಮೇಲೆ ಹೋಗಲು ಡಾಂಬರು ರಸ್ತೆಯೂ ಇದೆ, ನಗರ ಸಾರಿಗೆ ಸೌಲಭ್ಯವೂ ಇದೆ. ವಾಹನದಲ್ಲಿ ಬೆಟ್ಟಕ್ಕೆ ಹೋಗಿ ಇಳಿಯುತ್ತಿದ್ದಂತೆಯೇ ದೇವಾಲಯಕ್ಕೆ ಹೋಗುವ ದಾರಿಯಲ್ಲಿರುವ 12 ಅಡಿ ಎತ್ತರದ ಮಹಿಷಾಸುರನ ಬೃಹತ್ ಪ್ರತಿಮೆ ಪ್ರವಾಸಿಗರನ್ನು, ಭಕ್ತರನ್ನು ಸ್ವಾಗತಿಸುತ್ತದೆ. ಅಂಗಡಿಗಳ ಸಾಲಿನಲ್ಲಿ ಮುಂದೆ ಸಾಗಿದರೆ ಮಷಿಷಾಸುರನನ್ನೇ ಕೊಂದ ತಾಯಿ ಚಾಮುಂಡಿಯ ದರ್ಶನ ದೊರಕುತ್ತದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||