ಮುಖಪುಟ /ನಮ್ಮದೇವಾಲಯಗಳು  

ಅಮೃತಾಪುರ ಅಮೃತೇಶ್ವರ ದೇವಾಲಯ

Amrithapura, ಅಮೃತಾಪುರ, ಚಿಕ್ಕಮಗಳೂರು, chikmagalur, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಚಿತ್ರಕೃಪೆ ಸರ್ಕಾರದ ವೆಬ್ ಸೈಟ್ದೇವಾಲಯಗಳ ತವರು ಎಂದೇ ಖ್ಯಾತವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಮೃತಾಪುರ ಬಹು ಪುರಾತನ ನಗರ. ವಿಶಿಷ್ಠ ಶೈಲಿಯ ಸುಂದರ ದೇವಾಲಯದಿಂದ ಕೂಡಿರುವ ಈ ಊರು ಜಗದ್ವಿಖ್ಯಾತಿ ಪಡೆದಿರುವುದು ಇಲ್ಲಿರುವ ಅಮೃತೇಶ್ವರ ದೇವಾಲಯದಿಂದ.

ಹೊಯ್ಸಳರ ದೊರೆ ಎರಡನೇ ಬಲ್ಲಾಳನ ದಂಡನಾಯಕ ಅಮೃತೇಶ್ವರ ಕ್ರಿ.ಶ.1196ರಲ್ಲಿ ಇಲ್ಲಿ ಅಮೃತೇಶ್ವರ ದೇವಾಲಯ ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ. ಸೂಕ್ಷ್ಮ ಕೆತ್ತನೆಗಳ ಕಲಾಶ್ರೀಮಂತಿಕೆಯಿಂದ ಕೂಡಿದ ಈ ದೇವಾಲಯ ನೋಡುಗರ ಹೃನ್ಮನ ಸೆಳೆಯುತ್ತದೆ.

ಹೊಯ್ಸಳ ದೊರೆಗಳ ಕಲೋಪಾಸನೆಗೆ ಸಾಕ್ಷಿಯಾಗಿರುವ ಈ ದೇವಾಲಯ ಹಚ್ಚಹಸುರಿನಿಂದ ಕೂಡಿದ ಪ್ರದೇಶದಲ್ಲಿದ್ದು Amrithapura, ಅಮೃತಾಪುರ, ಚಿಕ್ಕಮಗಳೂರು, chikmagalur, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ  ದೇವಾಲಯಗಳು. ಚಿತ್ರಕೃಪೆ ಸರ್ಕಾರದ ವೆಬ್ ಸೈಟ್ಆಸ್ತಿಕ, ನಾಸ್ತಿಕರಿಬ್ಬರನ್ನೂ ಕೈಬೀಸಿ ಕರೆಯುತ್ತದೆ. ಎಲ್ಲ ಹೊಯ್ಸಳ ದೇವಾಲಯಗಂತೆಯೇ ಇಲ್ಲಿಯೂ ನಕ್ಷತ್ರಾಕಾರದ ಜಗಲಿಯಿದೆ. ಮಣ್ಣಿನಲ್ಲಿ ಮುಚ್ಚಿಹೋಗಿರುವ ಜಗಲಿಯ ಮೇಲೆ ವಿಶಾಲ ಮುಖಮಂಟಪ, ಸುಖನಾಸಿ, ಭುವನೇಶ್ವರಿಗಳಿಂದ ಕೂಡಿದ ಬೃಹತ್ ಭವ್ಯ ದೇವಾಲಯವಿದೆ.

ದೇವಾಲಯದ ಹೊರಭಿತ್ತಿಗಳಲ್ಲಿ ಭವ್ಯವಾದ ಶಿಲ್ಪಾಲಂಕರಣಗಳಿವೆ. ಸುತ್ತಲೂ ಇರುವ ಅರೆ ಮಂಟಪ, ಲತಾ ಸುರಳಿಗಳು ಹಾಗೂ ಅರೆಗೋಪುರ ಶಿಲ್ಪದ ಮೇಲಿನ ಪಟ್ಟಿಕೆಯಲ್ಲಿರುವ ಶಿಲ್ಪಗಳಂತೂ ಅತ್ಯಂತ ಮನಮೋಹಕ. ದೇವಾಲಯಕ್ಕೆ ಒಂದೇ ಒಂದು ವಿಮಾನ ಗೋಪುರ ಇದ್ದು, ಇದು ಏಕ ಕೂಟ ದೇವಾಲಯವಾಗಿದೆ. ಶಿಥಿಲವಾಗಿದ್ದ ಈ ದೇವಾಲಯಕ್ಕೆ ಹೊರಗಿನಿಂದ ಸಾಧಾರಣ ಕಲ್ಲು ಕಂಬಗಳನ್ನು ಆಧಾರವಾಗಿಟ್ಟು ರಕ್ಷಿಸಲಾಗಿದೆ.

Amrithapura, ಅಮೃತಾಪುರ, ಚಿಕ್ಕಮಗಳೂರು, ಚಿತ್ರಕೃಪೆ ಸರ್ಕಾರದ ವೆಬ್ ಸೈಟ್ chikmagalur, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ವಿಶಾಲವಾದ ಪ್ರಾಕರವಿರುವ ಈ ದೇವಾಲಯದ ಮಂಟಪಗಳಲ್ಲಿ ಛಾವಣಿಗೆ ಆಧಾರವಾಗಿ ನಿಂತಿರುವ ನುಣುಪಾದ ಕಲ್ಲಿನ ಕಂಬಗಳ ಸಾಲುಗಳ ನಡುವೆ ಇರುವ ಬೃಹದಾಕಾರದ ನಂದಿ ವಿಗ್ರಹದ ನೋಟ ರಮಣೀಯ. ಕಂಬಗಳಲ್ಲಿ ಸೂಕ್ಷ್ಮ ಕಲಾತ್ಮಕ ಕೆತ್ತನೆಗಳು ಇಲ್ಲದಿದ್ದರೂ ಭುವನೇಶ್ವರಿಗಳು ಶಿಲ್ಪ ಸೌಂದರ್ಯದ ಗಣಿಯಾಗಿವೆ.

ಬೆಂಗಳೂರು ಮಹಾನಗರದಿಂದ 245 ಕಿಲೋ ಮೀಟರ್ ದೂರದಲ್ಲಿರುವ ಅಮೃತಾಪುರ, ಚಿಕ್ಕಮಗಳೂರಿನಿಂದ 67 ಹಾಗೂ ತರೀಕೆರೆಯಿಂದ 4 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮೂಲಕ ಅಮೃತಾಪುರಕ್ಕೆ ಹೋಗಬಹುದು. ಅರಸೀಕೆರೆವರೆಗೆ ರೈಲು ಸೌಲಭ್ಯವೂ ಇದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು